ಬೆಂಗಳೂರಿನಲ್ಲಿ ಡ್ರೈವರ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಹೊಸಕಾಡು ನಿವಾಸಿ ಅಶೋಕ್ ರವರು ಕಳೆದ 3 ತಿಂಗಳಿನಿಂದ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದು, ಶುಶ್ರೂಷೆ ನಡೆಯುತ್ತಿದೆ. ಹೃದಯದಲ್ಲಿ ಸ್ಟಂಟ್ ಅಳವಡಿಸಿದ ಕಾರಣ ದುಡಿಯಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದು, ಆರ್ಥಿಕ ಸಮಸ್ಯೆ ತಲೆದೋರಿದ ಕಾರಣ ಅಶೋಕ್ ರವರ ಶ್ರೀಮತಿಯವರ ಮನವಿಯ ಮೇರೆಗೆ ಶಿವಾಯ ಫೌಂಡೇಶನ್ ವತಿಯಿಂದ 25,000 ರೂಪಾಯಿಗಳ ಧನಸಹಾಯ ಮಾಡಲಾಯಿತು. ಈ ಸಂಧರ್ಭ ಶಿವಾಯ ಫೌಂಡೇಶನ್ ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಮತ್ತಿತರರು ಉಪಸ್ಥಿತರಿದ್ದರು.

