ಪ್ರಸ್ತುತ ಕಾಲದಲ್ಲಿ ಜನಪ್ರತಿನಿಧಿಯೆಂದರೇ ಏನೋ ರಾಜ ಎಂಬಂತೆ ಭಾಸವಾಗುತ್ತದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದಕ್ಕಾಗಿ ಎಂಬುದನ್ನು ಮರೆತಂತಿದೆ. ಕಾರಿನಲ್ಲಿ ನಾಲ್ಕು ಜನರೊಂದಿಗೆ ಬಂದು ಇಳಿದು ಅದನ್ನು ನಮ್ಮೂರ ಕಾಯೋ ದೊರೆಯೇ ಎಂಬ ಹಾಡಿಗೆ ವಿಡಿಯೋ ಮಾಡಿ ಹಾಕಿದರೇ ಆಗಲಿಲ್ಲ. ಎಷ್ಟೇ ದೊಡ್ಡ ಜನಪ್ರತಿನಿಧಿಯಾಗಲಿ ಜನಸಾಮಾನ್ಯ ಕರೆ ಮಾಡಿದರೆ ಸ್ವೀಕರಿಸುವ ಸೌಜನ್ಯತೆ ಇರಬೇಕು. ಒಂದೊಮ್ಮೆ ಕಾರ್ಯಕ್ರಮದಲ್ಲೋ, ಸಭೆಯಲ್ಲೋ ಇದ್ದರೆ ಮಿಸ್ ಕಾಲ್ ನೋಡಿ ವಾಪಾಸು ಕರೆ ಮಾಡುವ ಪರಿಜ್ಞಾನ ಇರಬೇಕು. ಜನರ ತೆರಿಗೆಯ ಹಣದಿಂದ ಓಡಾಡಲು ಕಾರು, ಪೋನ್ ಬಿಲ್, ಸಂಬಳ ತಿನ್ನುವ ನೀವುಗಳು ಜನರ ಸಮಸ್ಯೆ ಅಥವಾ ನೋವಿಗೆ ಸ್ಪಂದಿಸುವ ಗುಣ, ಯೋಚನೆ ನಿಮ್ಮಲ್ಲಿ ಇಲ್ಲದಿದ್ದರೆ ನೀವು ಯಾವ ಕೆಲಸ ಮಾಡಿದರೂ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ನಗಣ್ಯವೇ. ಗೆದ್ದು ಶಾಸಕರಾಗಿ, ಸಂಸದರಾಗಿ, ಪರಿಷತ್ ನ ಹುದ್ದೆಯನ್ನು ಪಡೆದ ನಂತರ ಜನಸಾಮಾನ್ಯರ ಜೊತೆ ಬೆರೆಯುವುದನ್ನು ಕಳಿಯಿರಿ. ಗೆದ್ದ ನಂತರ ನೀವು ಒಂದು ಪಕ್ಷದ ವ್ಯಕ್ತಿಯಲ್ಲ ಆಯಾ ಕ್ಷೇತ್ರದ ಜನಪ್ರತಿನಿಧಿಯಾಗಿರುತ್ತೀರಿ ನೆನಪಿಡಿ. (ಕೆಲವರು ಕರೆ ಸ್ವೀಕರಿಸುವ ಹಾಗೂ ವಾಪಾಸ್ ಕರೆ ಮಾಡುವವರು ಇದ್ದರೆ). ಕೆಲವೊಂದು ಜನಪ್ರತಿನಿಧಿಗಳಲ್ಲಿ ಪೋನ್ ಇಲ್ಲ ಅಂದುಕೊಳ್ಳಬೇಕು ಆ ರೀತಿಯವರು ಇದ್ದಾರೆ. ಅದರಂತೆ ಅವರ ಪಿಎ ಗಳೋ ಅವರಲ್ಲಿ ಮಾತಾಡಲು ಲೈಸೆನ್ಸ್ ಪಡೆಯಬೇಕು. ಅವರೇ ಜನಪ್ರತಿನಿಧಿಗಳಂತೆ ಬಿಂಬಿಸುತ್ತಾರೆ.

